ಆರ್ಷ ವಿದ್ಯಾ ಸಮಾಜದ ಸಂಸ್ಥಾಪಕರಾದ ಆಚಾರ್ಯ ಶ್ರೀ ಕೆ.ಆರ್.ಮನೋಜ್ ಜಿರವರ ಶಿವರಾತ್ರಿ ದಿನಸಂದೇಶ – 3
AVS
ಆರ್ಷ ವಿದ್ಯಾ ಸಮಾಜದ ಸಂಸ್ಥಾಪಕರಾದ ಆಚಾರ್ಯ ಶ್ರೀ ಕೆ.ಆರ್.ಮನೋಜ್ ಜಿರವರ ಶಿವರಾತ್ರಿ ದಿನಸಂದೇಶ – 3
ಅಶಾಸ್ತ್ರೀಯವಾದದ್ದನ್ನು ತಿರಸ್ಕರಿಸುವ ಸ್ವಾತಂತ್ರ್ಯವನ್ನು ಸನಾತನಧರ್ಮ ನಮಗೆ ನೀಡುತ್ತದೆ ಎಂಬುದನ್ನು ನೆನಪಿಡಿ! ಅಧಿಕೃತವಾದ ಆರ್ಷಗುರುಪರಂಪರೆಗಳಿಂದ ನೇರವಾಗಿ ಕೇಳಿ ಕಲಿಯಬೇಕಾದ ವಿದ್ಯೆಯೇ ಸನಾತನಧರ್ಮ.(ಗುರುಮುಖದಿಂದ ಕೇಳಬೇಕಾದ್ದರಿಂದ ವೇದವನ್ನು ಶ್ರುತಿ ಎಂದು ಕರೆಯಲಾಗುತ್ತದೆ) ವೇದೋಪನಿಷತ್ ಗ್ರಂಥಗಳು, ಇತಿಹಾಸಗಳು, ದಾರ್ಶನಿಕ ಕೃತಿಗಳು, ಋಷಿಗಳು ರಚಿಸಿದ ದಿವ್ಯಸ್ತೋತ್ರಗಳು ಅಧಿಕೃತ ಗ್ರಂಥಗಳು! ಇವುಗಳಲ್ಲಿ ಯಾವುದರಲ್ಲೂ ಇಂತಹ ತಪ್ಪು ಕಥೆಗಳಿಲ್ಲ. ಅವುಗಳಲ್ಲಿಯೇ ತಪ್ಪು ಇದ್ದರೆ ಅದನ್ನು ಸರಿಪಡಿಸುವ ಸ್ವಾತಂತ್ರ್ಯ ಮತ್ತು ಹಕ್ಕು ನಮಗಿದೆ ಎಂದು ಋಷಿಗಳು ಘೋಷಿಸುತ್ತಾರೆ. ಸನಾತನಧರ್ಮದ ಮಹತ್ವ ಸತ್ಯದ ಬಗೆಗಿನ ಈ ಬದ್ಧತೆಯಾಗಿದೆ. ಸತ್ಯಾನ್ವೇಷಣೆಯೇ ಆಧ್ಯಾತ್ಮಿಕ ಜೀವನ. ಗ್ರಂಥಗಳಿಗೆ ಗ್ರಂಥದೋಷಗಳು ಇರಬಹುದು (ಮನುಷ್ಯನ ಹಸ್ತಕ್ಷೇಪ, ಸೇರ್ಪಡೆ (ಪ್ರಕ್ಷಿಪ್ತ), ತಿದ್ದುಪಡಿ, ತೆಗೆದುಹಾಕುವಿಕೆ ಇತ್ಯಾದಿ…)
ಸ್ವಾಧ್ಯಾಯ ರೀತಿಯಲ್ಲೇ ಎಲ್ಲವನ್ನು ಕಲಿಯಬೇಕು. (ಶ್ರವಣ, ಮನನ (Brainstorming), ನಿದಿಧ್ಯಾಸನ ಎಂಬ ಕ್ರಮದಲ್ಲಿ). ಸ್ವಾಧ್ಯಾಯಸಂಪ್ರದಾಯ ಕಳೆದುಹೋಗಿರುವುದೇ ನಮ್ಮ ಎಲ್ಲಾ ಅವನತಿಗಳಿಗೆ ಕಾರಣ. ಪ್ರತ್ಯಕ್ಷ (ಇಂದ್ರಿಯಾನುಭವಜನ್ಯ, ಶಾಸ್ತ್ರಸಮ್ಮತ), ಅನುಮಾನ (ಯುಕ್ತಿ), ಶಬ್ದ (ಆಪ್ತವಚನ, ಅಂತರ್ದರ್ಶನ, ಶ್ರುತಿ) ಎಂಬ ಪ್ರಮಾಣಗಳಿಗೆ ವಿರುದ್ಧವಾದ ಉಲ್ಲೇಖಗಳು ಎಲ್ಲಿದ್ದರೂ ಅದನ್ನು ತ್ಯಜಿಸುವ ಆಹ್ವಾನವೂ ಇದೆ!! ಪುರಾಣಗಳು ಅಧಿಕೃತವಲ್ಲ. ಸಮಾಜದಲ್ಲಿ ಪ್ರಚಲಿತದಲ್ಲಿದ್ದ ವಿಚಾರಗಳನ್ನು ಸಂಸ್ಕೃತದಲ್ಲಿ ದಾಖಲಿಸಿದ ಕೃತಿಗಳು ಮಾತ್ರ ಇವು. ಅದರಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಇದೆ.
ಆದ್ದರಿಂದ ಯಾರು ಹೇಳಿದರೂ, ಎಲ್ಲಿ ಬರೆದಿದೆ ಎಂದು ಹೇಳಿದರೂ ತಪ್ಪುಗಳನ್ನು ತಿರಸ್ಕರಿಸಲು ಎರಡನೇ ಬಾರಿ ಯೋಚಿಸಬೇಕಾಗಿಲ್ಲ ಎಂದು ಅರ್ಥ. ಶಿವರಾತ್ರಿಯ ಹೆಸರಿನಲ್ಲಿ ಪ್ರಚಲಿತದಲ್ಲಿರುವ ಒಂದು ಕಥೆಯನ್ನು ಉದಾಹರಣೆಯಾಗಿ ತೋರಿಸಬಹುದು: “ಕಾಲಕೂಟ (ಹಾಲಾಹಲ) ವಿಷವು ಹೊಟ್ಟೆಗೆ ಇಳಿಯದಂತೆ ಪಾರ್ವತಿ ಪರಮಶಿವನ ಕುತ್ತಿಗೆಯನ್ನು ಹಿಡಿದಳು! ವಿಷ ಇಳಿಯದಂತೆ ನಿದ್ರೆಯಿಲ್ಲದೆ ಇದ್ದಳು, ಅದೇ ಶಿವರಾತ್ರಿ” ಹೀಗೆ ಕೆಲವು ಅಸಂಬದ್ಧ ಕಥೆಗಳು ಶಿವರಾತ್ರಿಯ ಹೆಸರಿನಲ್ಲಿ ಪ್ರಚಲಿತದಲ್ಲಿವೆ!!