Member   Donate   Books   0

ಗಣಪತಿ: ಮಿಥ್ಯೆಯೋ ಅಥವಾ ವಾಸ್ತವವೋ? – ಗಜಮುಖ ಗಣಪತಿಯನ್ನು ಅರ್ಥಮಾಡಿಕೊಳ್ಳೋಣ

AVS

ಗಣಪತಿಗೆ ಆನೆಯ ತಲೆ ಹೇಗೆ ದೊರೆಯಿತು?

ಗಣಪತಿಯು ಪುರಾಣಕಥೆಗಳಲ್ಲಿ ಕೇವಲ ಒಂದು ಮಿಥ್ಯೆಯೇ!?

ಅಥವಾ ಗಜಮುಖ ಗಣಪತಿಯ ಹಿಂದೆ ಆಳವಾದ ಆಧ್ಯಾತ್ಮಿಕ ಸತ್ಯವಿದೆಯೇ?

ಒಬ್ಬ ತಾಯಿ ಮತ್ತು ತಂದೆ ತಮ್ಮ ಮಕ್ಕಳಿಗೆ ಗಣಪತಿಯ ರೂಪದ ಹಿಂದಿರುವ ವಾಸ್ತವವನ್ನು ವಿವರಿಸುವ ದೃಶ್ಯವನ್ನು ಈ ವೀಡಿಯೋದಲ್ಲಿ ಕಾಣಬಹುದು.

ಗಣಪತಿಗೆ ಸಂಬಂಧಿಸಿದಂತೆ ಪ್ರಚಲಿತದಲ್ಲಿರುವ ಗೊಂದಲಮಯ ಹಾಗೂ ತಪ್ಪುಗಳಿಂದ ಕೂಡಿದ ಪುರಾಣಕಥೆಗಳು ಮತ್ತು ಸಾಂಪ್ರದಾಯಿಕ ನಿರೂಪಣೆಗಳನ್ನು ಪರಿಶೀಲಿಸುವಾಗ, ಸರಿ ಮತ್ತು ತಪ್ಪನ್ನು ಗುರುತಿಸುವ ಜ್ಞಾನವಾದ ವಿವೇಕವನ್ನು ಬಳಸುವ ಅಗತ್ಯವನ್ನೂ ಈ ವೀಡಿಯೋ ತಿಳಿಸುತ್ತದೆ.

ಗಣಪತಿಯ ನಿಜವಾದ ಸ್ವರೂಪಗಳ ಕುರಿತು ಋಷಿಗಳು ಹೇಳುವುದು ಹೀಗಿದೆ!
ವೇದಗಳಲ್ಲಿನ ಗಣಪತಿ – ಏಕೈಕ ಮತ್ತು ಅದ್ವಿತೀಯನಾದ ಪರಮೇಶ್ವರನ ಮತ್ತೊಂದು ನಾಮವೇ ಗಣಪತಿ.
ಮೂಲಗಣಪತಿ – ಕಾರಣಲೋಕದ ಮಹಾಗಣಪತಿ; ಜ್ಯೋತಿಸ್ವರೂಪನೂ ಸಚ್ಚಿದಾನಂದಸ್ವರೂಪನೂ ಆಗಿರುವ ಗಣಪತಿ.
ಗಜಮುಖ ಗಣಪತಿ – ಗಜಾಸುರ ಮತ್ತು ಅನಲಾಸುರರನ್ನು ಸಂಹರಿಸಿ ಲೋಕವನ್ನು ರಕ್ಷಿಸುವುದಕ್ಕಾಗಿ ಭೂಲೋಕದಲ್ಲಿ ಭಕ್ತರ ಮುಂದೆ ಪ್ರತ್ಯಕ್ಷನಾದ ಗಣಪತಿ.

ಹಿರಣ್ಯಕಶಿಪುವಿನಿಂದ ಪ್ರಹ್ಲಾದನನ್ನೂ ಲೋಕವನ್ನೂ ರಕ್ಷಿಸುವುದಕ್ಕಾಗಿ ನರಸಿಂಹಮೂರ್ತಿ ಅವತರಿಸಿದಂತೆ, ದುಷ್ಟತನದಿಂದ ಲೋಕವನ್ನು ರಕ್ಷಿಸುವುದಕ್ಕಾಗಿ ಗಜಮುಖ ಗಣಪತಿಯೂ ಭೂಲೋಕದಲ್ಲಿ ಅವಿರ್ಭವಿಸಿದನು.

ಈ ವಿನಾಯಕ ಚತುರ್ಥಿಯಂದು, ಈಶ್ವರನ ಸ್ವಭಾವಕ್ಕೆ ಹೊಂದಿಕೆಯಾಗದ ಕಥೆಗಳನ್ನು ಕುರುಡಾಗಿ ಪುನರಾವರ್ತಿಸುವ ಬದಲು, ನಮ್ಮ ಸನಾತನ ಧರ್ಮ ಪರಂಪರೆಯಲ್ಲಿರುವ ಆಳವಾದ ಜ್ಞಾನವನ್ನು ಕಲಿಯೋಣ, ಅರ್ಥಮಾಡಿಕೊಳ್ಳೋಣ ಮತ್ತು ಹಂಚಿಕೊಳ್ಳೋಣ.

ಅಸಂಬದ್ಧತೆಯಲ್ಲ, ಜ್ಞಾನವನ್ನೇ ನಾವು ಪ್ರಚಾರ ಮಾಡಬೇಕು.
ಕೇವಲ ಆಚರಣೆಗಳನ್ನು ಅನುಕರಿಸುವುದಲ್ಲ, ನಮ್ಮ ಧರ್ಮವನ್ನು ಅರ್ಥಮಾಡಿಕೊಳ್ಳುವುದೇ ಅಗತ್ಯ.

ಎಲ್ಲರಿಗೂ ಹೃದಯಪೂರ್ವಕ ಗಣೇಶ ಚತುರ್ಥಿಯ ಶುಭಾಶಯಗಳು!

ಓಂ ಗಂ ಗಣಪತಯೇ ನಮಃ