Skip to content

Sanathana Dharma – Response to Pinarayi Vijayan and MV Govindan by Aacharyasri KR Manoj ji – Part 3

  • by

ಮುಖ್ಯಮಂತ್ರಿಗಳ ಟೀಕೆಗಳು! - ಮೂರನೇ ಲೇಖನ

ಮುಖ್ಯಮಂತ್ರಿಗಳ ಮಾತುಗಳಲ್ಲಿ ಕೆಲವು ಸ್ವಾಗತಾರ್ಹವಾದ ಬದಲಾವಣೆಗಳಿವೆ ಎಂದು ನಾನು ಫೇಸ್ಬುಕ್‌ನಲ್ಲಿ 2025 ಜನವರಿ 7ರಂದು ಪ್ರಕಟಿಸಿದ ಎರಡನೇ ಲೇಖನದಲ್ಲಿ ಸೂಚಿಸಿದ್ದೆ.

ಮಹಾತ್ಮ ಗಾಂಧಿಯವರ ಮೇಲೆ ಶ್ರೀನಾರಾಯಣ ಗುರುದೇವರ ಪ್ರಭಾವ ಮತ್ತು ಕಾಕಿನಡಾ ಕಾಂಗ್ರೆಸ್ ಸಮ್ಮೇಳನದಲ್ಲಿ ಜಾತಿ ತಾರತಮ್ಯವನ್ನು ನಿಷೇಧಿಸುವ ನಿರ್ಣಯ ಪ್ರಸ್ತಾಪಿಸಿದ್ದರ ಹಿಂದಿನ ಗುರುವಿನ ಪ್ರಭಾವ ಹಾಗೂ ಟಿ.ಕೆ.ಮಾಧವನ್ ಅವರ ಕೊಡುಗೆಯ ಕುರಿತು ಮುಖ್ಯಮಂತ್ರಿಯು ಸೂಚಿಸಿದ್ದರು. ಇವೆಲ್ಲವೂ ಪಕ್ಷದ ಹಳೆಯ ನಿಲುವಿನಿಂದ ಆರೋಗ್ಯಕರವಾದ ಬೆಳವಣಿಗೆ ಎಂದು ಕಾಣಬಹುದು.

ಆದರೆ ಮುಖ್ಯಮಂತ್ರಿಗಳ ಕೆಲವು ಅಭಿಪ್ರಾಯಗಳಿಗೆ ನಾನು ಒಪ್ಪಿಗೆ ನೀಡಲು ಸಾಧ್ಯವಿಲ್ಲ. ಈ ಟೀಕೆಗಳನ್ನು ಗಮನಿಸೋಣ:

1. “ಶ್ರೀನಾರಾಯಣಗುರು ಸನಾತನಧರ್ಮದ ವಕ್ತಾರರೊ ಅಭ್ಯಾಸಿಯೊ ಆಗಿರಲಿಲ್ಲ, ಬದಲಿಗೆ, ಅವರು ಈ ಧರ್ಮವನ್ನು ಚೂರುಗಡಿದು ನವೀಕರಿಸಿ, ಹೊಸ ಕಾಲಕ್ಕೆ ತಕ್ಕ ನವಯುಗಧರ್ಮವನ್ನು ಸಾರಿದ ಸನ್ಯಾಸಿಯಾಗಿದ್ದರು. ಸನಾತನಧರ್ಮವನ್ನು ಅನುಸರಿಸುವ, ಅನುಮಾನದಿಂದ ನೋಡುವ ಮತ್ತು ಅದನ್ನು ಎದುರಿಸಿ(ಪ್ರಶ್ನಿಸಿ) ದಿಕ್ಕರಿಸುವ ಮೂರು ಪ್ರಭೇದಗಳು ಭಾರತದೊಳಗಿದ್ದವು. ಇದರಲ್ಲಿ ಮೂರನೆಯ ಪ್ರಭೇದವನ್ನು ಪ್ರತಿನಿಧಿಸಿದ್ದವರು ನಾರಾಯಣ ಗುರು.”

(ಈ ಅಭಿಪ್ರಾಯವನ್ನು ಈ ಲೇಖನದಲ್ಲಿ ಚರ್ಚಿಸುತ್ತೇವೆ.)
2. “ಸನಾತನಧರ್ಮ ಎಂಬುದು ಸ್ಮೃತಿ ವ್ಯವಸ್ಥೆಯಲ್ಲಿರುವ ವರ್ಣಾಶ್ರಮ ವ್ಯವಸ್ಥೆ ಮಾತ್ರವಲ್ಲದೆ ಬೇರೇನು ಅಲ್ಲಾ” ಎಂದು ಅವರು ವಾದಿಸುತ್ತಾರೆ. ಇದರಿಂದ ಸನಾತನಧರ್ಮವೇ ಜಾತಿ ವ್ಯವಸ್ಥೆ ಎಂದು ತೋರಿಸಲು ಯತ್ನಿಸುತ್ತಿದ್ದಾರೆ. ಇದು ಸರಿಯೊ ಅಲ್ಲವೋ ಎಂಬುದನ್ನು ಮುಂದಿನ ಲೇಖನಗಳಲ್ಲಿ ವಿವರಿಸುತ್ತೇವೆ.

3. “ಆ ವರ್ಣಾಶ್ರಮ ಧರ್ಮವನ್ನು ಎದುರಿಸುತ್ತಾ ಅದನ್ನು ಮೀರಿ ಕಾಲಕ್ಕೆ ಹೊಂದಿಕೊಂಡಿರುವುದೆ ಗುರುವಿನ ನವಯುಗ ಮಾನವಿಕ ಧರ್ಮ. ಗುರುವಿನ ಈ ನವಯುಗ ಧರ್ಮವು, ಬೇರೆ ಧರ್ಮಗಳು ನಿರೂಪಿಸುವಂತದಲ್ಲ. ಯಾವುದೇ ಧರ್ಮವಾದರು ಅಲ್ಲಿ ತನಕ ‘ಧರ್ಮ ಯಾವುದೇ ಆಗಿರಲಿ ಮನುಷ್ಯನು ಒಳ್ಳೆಯವನಾದರೆ ಸಾಕು’ ಎಂದು ಹೇಳಿದೆಯೇ? ಇಲ್ಲ. ಎಲ್ಲಾ ಧರ್ಮಗಳ ಸಾರ ಒಂದೇ ಎಂದು ಈತನಕ ಯಾವ ಧರ್ಮವಾದರು ಹೇಳಿದೆಯೇ? ಇಲ್ಲ. ಅಲ್ಲಿಗೇ ಸ್ಪಷ್ಟವಾಗುವುದು ಏನು? ಧರ್ಮಾತೀತವಾದ ಮಾನವೀಯತೆಯ ಸತ್ಯವನ್ನು ಒಳಗೊಂಡಿರುವ ಮನುಷ್ಯತ್ವ ಪರವಾದ ವಿಶ್ವ ದರ್ಶನವನ್ನು ಗುರು ಎತ್ತಿಹಿಡಿದದ್ದು.
ಅದನ್ನು ಸನಾತನಧರ್ಮದ ಚೌಕಟ್ಟಿನಲ್ಲಿ ಸೇರಿಸಲು ಯತ್ನಿಸಿದರೆ ಅದು ಗುರುವಿಗೆ ಮಾಡುವ ಬಹಳ ದೊಡ್ಡ ಅಗೌರವವೆನಿಸಿಕೊಳ್ಳುತ್ತದೆ,” ಎಂದು ಮುಂದುವರೆಸಿದರು.

ಶ್ರೀನಾರಾಯಣಗುರುವಿನ ಮಹತ್ವವನ್ನು ಸಾರಲು ಮುಖ್ಯಮಂತ್ರಿಗಳು ಈ ರೀತಿಯಾಗಿ ಹೇಳಿದ್ದರೆ, ಅದಕ್ಕೆ ವಿರೋಧವಿಲ್ಲ. ಆದರೆ ಗುರುವಿನ ಈ ಏಕತ್ವದರ್ಶನ ಮತ್ತು ಮಾನವ ಧರ್ಮ ವೀಕ್ಷಣೆಗಳು ಸನಾತನಧರ್ಮದಲ್ಲಿ ಇಲ್ಲದಿರುವುದು ಅಥವಾ ಅದಕ್ಕೂ ಮುಂಚೆ ಆರ್ಷಗುರುಗಳ್ಯಾರು ಹೇಳದಿರುವುದು ಎಂಬುದನ್ನು ಸ್ಥಾಪಿಸಲು ಮುಖ್ಯಮಂತ್ರಿಗಳು ಯತ್ನಿಸುತ್ತಿದ್ದರೆ, ಅದನ್ನು ಒಪ್ಪಲು ಸಾಧ್ಯವಿಲ್ಲ. ಅದರ ಕಾರಣಗಳೇನೆಂದು ಸಾಕ್ಷಿಗಳ ಸಹಿತ ಮುಂದಿನ ಲೇಖನಗಳಲ್ಲಿ ವಿವರಿಸುತ್ತೇನೆ.
4.”ಧರ್ಮವೆಂದರೇನು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದೆ, ಸಂಶಯದ ಪ್ರಶ್ನಾರ್ಥಕ ಚಿಹ್ನೆಯನ್ನು ಎತ್ತಿ ಮಹಾಭಾರತವು ಹಿಂದೆ ಸರಿಯುತ್ತದೆ” – ಎಂಬ ಇನ್ನೊಂದು ವಿಮರ್ಶೆ.
ಧರ್ಮವೆಂದರೇನು ಎಂಬುದರ ಬಗ್ಗೆ ಮಹಾಭಾರತದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಬಹಳ ಚರ್ಚೆಗಳು ನಡೆಯುತ್ತವೆ. ಜೊತೆಗೆ ಶ್ರೀಕೃಷ್ಣಪಕ್ಷ (ಪಾಂಡವಪಕ್ಷ) ಸರಿಯಾದದು ಎಂದು ಆ ಗ್ರಂಥದಲ್ಲಿ ತೀರ್ಮಾನಿಸಲಾಗಿದೆ. ಆದ್ದರಿಂದ ಈ ಆರೋಪಕ್ಕೂ ಆಧಾರವಿಲ್ಲ. ಅಗತ್ಯವಿದ್ದರೆ ಈ ವಿಷಯವನ್ನೂ ನಂತರ ಚರ್ಚಿಸಲು ಪ್ರಯತ್ನಿಸಬಹುದು.

5.“ಸನಾತನ ಹಿಂದೂತ್ವ ಎಂಬ ಪದದ ಮೂಲಕ ಸ್ಥಾಪಿಸಲು ಪ್ರಯತ್ನಿಸುತ್ತಿರುವುದು ಬ್ರಾಹ್ಮಣಾಧಿಪತ್ಯದ ಹಳೆಯ ರಾಜರ ಆಳ್ವಿಕೆಯ ಕಾಲವನ್ನೇ.”
ಈ “ಸನಾತನಧರ್ಮಫೋಬಿಯಾ”ಗೆ ಆಧಾರವಿದೆಯೇ ಎಂಬುದು ಪರೀಕ್ಷಿಸಬೇಕಾಗಿರುವಂತದ್ದು.

6. ಸುಪ್ರಸಿದ್ಧವಾದ ವಿಶ್ವಶಾಂತಿ ಪ್ರಾರ್ಥನೆ (ಲೋಕಾಃ ಸಮಸ್ತಾಃ ಸುಖಿನೋ ಭವಂತು ಎಂದು ಮುಗಿಯುವ)ಯು ಅದರಲ್ಲಿ “ಗೋ ಬ್ರಾಹ್ಮಣೇಭ್ಯಃ” ಎಂಬ ಉಲ್ಲೇಖದ ವಿಷಯವಾಗಿ ಅವರು ಟೀಕಿಸುತ್ತಾರೆ.
ಈ ಆಕ್ಷೇಪಕ್ಕೂ ಈ ಲೇಖನ ಸರಣಿಯಲ್ಲಿಯೇ ಉತ್ತರ ನೀಡಲಾಗಿದೆ.

ಸಂಕ್ಷಿಪ್ತವಾಗಿ, ಇವು ಶ್ರೀ ಪಿಣರಾಯಿ ವಿಜಯನ್ ಅವರ ಪ್ರಮುಖ ಸನಾತನಧರ್ಮದ ವಿರುದ್ಧದ ಟೀಕೆಗಳು. ಈ ಆರೋಪಗಳಿಗೆಲ್ಲಾ ಒಂದೊಂದಾಗಿ ಉತ್ತರ ಮತ್ತು ವಿವರಗಳನ್ನು ನೀಡಬಹುದು. ಆದರೆ ಮುಖ್ಯಮಂತ್ರಿಗೆ ಉತ್ತರ ನೀಡುವುದು ಮಾತ್ರ ಈ ಲೇಖನಸರಣಿಯ ಉದ್ದೇಶ ಎಂದು ಊಹಿಸಬಾರದು. ಇಂದಿನ ಸಾಮಾನ್ಯ ಜನರಲ್ಲಿ ಬೇರು ಬಿಟ್ಟಿರುವ ಕೆಲವು ತಪ್ಪುಕಲ್ಪನೆಗಳನ್ನು ಮತ್ತು ದುಷ್ಟಪ್ರಚಾರಗಳನ್ನು ಸಾಧ್ಯವಾದಷ್ಟು ಪುರಾವೆಗಳು ಹಾಗು ಅಧಿಕೃತ ಸಂಗತಿಗಳ ಮೂಲಕ ಸರಿಪಡಿಸುವ ಪ್ರಯತ್ನವಿದು. ಸತ್ಯಾನ್ವೇಷಣೆಯಲ್ಲಿ ಆಸಕ್ತಿಯಿರುವವರೆಲ್ಲಾ ಈ ಚರ್ಚೆಗೆ ಸ್ವಾಗತ. ವಿವಿಧ ಅಭಿಪ್ರಾಯಗಳು ಮತ್ತು ಸಂಶಯಗಳಿಗೆ ಉತ್ತರ ನೀಡಲು ಸಿದ್ಧನಿದ್ದೇನೆ. ಆರೋಗ್ಯಕರ ಟೀಕೆಗಳನ್ನು ಸ್ವೀಕರಿಸುತ್ತೇನೆ.

Chennai-Awareness-Class-Acharyasri-KR-Manoj-Ji-Speaking

ಶ್ರೀ ಪಿಣರಾಯಿ ವಿಜಯನ್ ಅವರ ಮೊದಲ ಟೀಕೆಯನ್ನು ತೆಗೆದುಕೊಳ್ಳೋಣ. ಅದು ಈ ಕೆಳಗಿನಂತಿದೆ:

(1) “ಶ್ರೀನಾರಾಯಣ ಗುರು ಸನಾತನಧರ್ಮದ ವಕ್ತಾರರೊ- ಅಭ್ಯಾಸಿಯೊ ಆಗಿರಲಿಲ್ಲ, ಬದಲಾಗಿ ಆ ಧರ್ಮವನ್ನು ಚೂರುಗಡಿದು ನವೀಕರಿಸಿ, ಹೊಸ ಕಾಲಕ್ಕೆ ತಕ್ಕಂತೆ ಒಂದು ನವಯುಗಧರ್ಮವನ್ನು ಸಾರಿದ ಸಂನ್ಯಾಸಿ ಶ್ರೇಷ್ಠನಾಗಿದ್ದರು. ಸನಾತನಧರ್ಮವನ್ನು ಅನುಸರಿಸುವ, ಸಂಶಯದಿಂದ ನೋಡುವ ಮತ್ತು ಸವಾಲು ಹಾಕಿ ಧಿಕ್ಕರಿಸುವ ಮೂರು ಪ್ರಭೇದಗಳು ಭಾರತದೊಳಗಿದ್ದವು. ಇದರಲ್ಲಿ ಮೂರನೆಯ ಪ್ರಭೇದವನ್ನು ಪ್ರತಿನಿಧಿಸಿದ್ದವರು ನಾರಾಯಣ ಗುರು.”

ಈ ಹೇಳಿಕೆ ವಾಸ್ತವಿಕವಾಗಿದೆಯೇ?

ಹಿಂದೂ ಸಮಾಜದಲ್ಲಿ ಹರಡಿಕೊಂಡಿದ್ದ ಸಂಪ್ರದಾಯವಾದ ನಿಲುವುಗಳನ್ನು ದೂರ ಮಾಡುವ ಕಾರ್ಯವನ್ನೇ ಮುಖ್ಯಮಂತ್ರಿ “ಚೂರುಗಡಿದು ನವೀಕರಿಸಿ” ಎಂಬ ಪದದಿಂದ ಉದ್ದೇಶಿಸುತ್ತಿದ್ದರೆ, ಅದಕ್ಕೆ ಪೂರ್ಣ ಒಪ್ಪುಗೆಯಿದೆ.

**ಗುರುದೇವರ ಅಪರೂಪದ ಕೊಡುಗೆಗಳು!**

 
ಹೊಸ ಕಾಲಕ್ಕೆ ತಕ್ಕ ಶ್ರೇಷ್ಠ ಉಪದೇಶಗಳು ಮತ್ತು ಮಾದರಿಗಳನ್ನು ಶ್ರೀನಾರಾಯಣ ಗುರು ಕೊಟ್ಟಿದ್ದಾರೆ ಎಂಬುದು ಸತ್ಯ. “ವಿದ್ಯೆಯಿಂದ ಪ್ರಬುದ್ಧರಾಗಿ, ಸಂಘಟನೆ ಮೂಲಕ ಶಕ್ತರಾಗಿ, ಉದ್ಯಮದಿಂದ ಅಭಿವೃದ್ಧಿ ಹೊಂದಿ”, ‘ಒಂದು ಜಾತಿ ಒಂದು ಧರ್ಮ ಒಂದು ದೈವ’, ‘ಜಾತಿ ಕೇಳಬೇಡ, ಹೇಳಬೇಡ, ಚಿಂತಿಸಬೇಡ’, ‘ಧರ್ಮ ಯಾವುದೇ ಆದರೂ, ಮನುಷ್ಯನು ಒಳ್ಳೆಯವನಾಗಿದ್ದರೆ ಸಾಕು’ ಮತ್ತು ಇನ್ನೂ ಎಷ್ಟೋ ಸಂದೇಶಗಳು!

ಸಂಸ್ಕೃತ, ಮಲಯಾಳಂ, ತಮಿಳ್, ಈ ಮೂರು ಭಾಷೆಗಳಲ್ಲಿ ದಿವ್ಯ ಸ್ತೋತ್ರಗಳನ್ನು ರಚಿಸಿರುವ ಮತ್ತೊಬ್ಬ ಋಷಿಯಿಲ್ಲ. ಬಾದರಾಯಣ ಬ್ರಹ್ಮಸೂತ್ರದ ವಿವರಣೆಗಳನ್ನು ಶ್ರೀ ಶಂಕರಾಚಾರ್ಯರು ರಚಿಸಿದರೆ, ಶ್ರೀನಾರಾಯಣ ಗುರು ಸೂತ್ರಗಳಿಂದ “ವೇದಾಂತಸೂತ್ರಂ” ಎಂಬ ಗ್ರಂಥವನ್ನೇ ಬರೆದಿದ್ದಾರೆ. ವೈದಿಕ ಋಷಿಗಳ ತತ್ತ್ವವನ್ನು ಅನುಸರಿಸಿ ಹೊಸ ಮಂತ್ರಗಳ ರಚನೆ ಮಾಡಿದ್ದಾರೆ (ಉದಾಹರಣೆಗೆ: ಹೋಮ ಮಂತ್ರ).

**ಗುರುದೇವರ ದೇವಸ್ಥಾನ ಮಾದರಿಗಳು!**

ತಂತ್ರವಿಧಿ ಪ್ರಕಾರ ಪ್ರಾಣಪ್ರತಿಷ್ಠೆ ನೆರವೇರಿಸಿ ಅಸಂಖ್ಯಾತ ದೇವಸ್ಥಾನಗಳನ್ನು ನಿರ್ಮಿಸಿರುವುದು ಮತ್ತು ಸಾಂಪ್ರದಾಯವಾದದ ಬದಲು ಸನಾತನ ಧರ್ಮದ ದೇವಾಲಯ ವಿವರಣೆಯ ಪ್ರಕಾರ ನಿರ್ಮಿಸಲಾದ ದೇವಾಲಯಗಳು ಎಲ್ಲವೂ ಮುಖ್ಯಾಂಶಗಳು.
 

ಹೀಗೆ ಪ್ರತಿಷ್ಠೆ ಮಾಡಿದ ‘ಹಿಂದಿನ ವರ್ಗ’ದವರಲ್ಲಿ ಶ್ರೀ ನಾರಾಯಣಗುರು ಮೊದಲನೆಯವರಲ್ಲ. ಓಮಲನ್ ಎಂಬ ಪುಲಯ ವರ್ಗಕ್ಕೆ ಸೇರಿದ ಯುವ ಯೋಗಿಯೂ ಮತ್ತು ಆರಾಟುಪುಝ ವೇಲಾಯುಧ ಪಣಿಕ್ಕರೂ ಗುರುದೇವರಿಗು ಮುಂಚೆಯೇ ಶಿವಲಿಂಗ ಪ್ರತಿಷ್ಠೆ ನಡೆಸಿರುವವರು. (ಆರಾಟುಪುಝ ವೇಲಾಯುಧ ಪಣಿಕ್ಕರ್ ದೇವಾಲಯ ನಿರ್ಮಾಣದ ಮೇಲ್ವಿಚಾರಣೆ ಮಾತ್ರ ವಹಿಸಿದ್ದರು) ಆದರೆ ಶುದ್ಧ ತಂತ್ರವಿಧಿ ಪ್ರಕಾರದ ದೇವಾಲಯ ಮಾದರಿಗಳನ್ನು ವ್ಯಾಪಕವಾಗಿ ನಿರ್ಮಿಸಿ, ಅವುಗಳೊಂದಿಗೆ ನವೋತ್ಥಾನ – ಸಾಮಾಜಿಕ ಪರಿಷ್ಕರಣೆ – ಶಿಕ್ಷಣ – ಉದ್ಯೋಗ – ಕೈಗಾರಿಕೆ – ಸೇವಾ ಯೋಜನೆಗಳನ್ನು ಪ್ರಾರಂಭಿಸಿದ್ದು ಶ್ರೀ ನಾರಾಯಣಗುರುವಿನ ದೇವಾಲಯ ಮಾದರಿಯ ವಿಶೇಷತೆಯಾಗಿದೆ. “ಕ್ಷಯಾತ್ ತ್ರಾಯತೇ ಇತಿ ಕ್ಷೇತ್ರ:” (ವ್ಯಕ್ತಿಯನ್ನೂ ಸಮಾಜವನ್ನೂ ಎಲ್ಲಾ ರೀತಿಯ ಕಷ್ಟಗಳಿಂದ ಮುಕ್ತಿ ನೀಡುವ ಸ್ಥಳವಾಗಿರಬೇಕು ದೇವಾಲಯ) ಎಂಬುದು ಆರ್ಷ ಧರ್ಮವು ಅನುಶಾಸಿಸುತ್ತದೆ, ಅದಕ್ಕೆ ಅನುಗುಣವಾಗಿ ಎಲ್ಲಾ ಯೋಜನೆಗಳನ್ನು ಅವರು ರೂಪಿಸಿದ್ದರು.

“ದೇವಾಲಯದಲ್ಲಿ ಆನೆ ಬೇಕಿಲ್ಲ, ಪಟಾಕಿಯೂ ಬೇಡ” ಎಂದು ಅವರು ಸೂಚಿಸಿದರು. ದೇವಾಲಯದ ಸಮೀಪದಲ್ಲಿನ ಮೃಗಬಲಿ, ಮದ್ಯನಿವೇದನೆ, ದೇವರ ಹೆಸರಲ್ಲಿ ಕುಣಿಯುವುದು ಮುಂತಾದ ಕ್ರಿಯೆಗಳನ್ನು ನಿಲ್ಲಿಸಿದರು. ಅನಾವಶ್ಯಕ ಹಾಗೂ ಆರ್ಭಟದ ವಿಧಿಗಳ ಬದಲಾಗಿ ಸರಳ ಹಾಗೂ ಭಕ್ತಿ ಭರಿತ ವ್ಯವಸ್ಥೆಯನ್ನು ರಚಿಸಿದರು. ದೇವಾಲಯಗಳ ಸಮೀಪದಲ್ಲಿಯೇ ಹೂದೋಟ, ಗ್ರಂಥಾಲಯ, ಶಾಲೆ, ಕೈಗಾರಿಕೆ-ಉದ್ಯೋಗ ಸಂಸ್ಥೆಗಳನ್ನು ನಿರ್ಮಿಸಿದರು. ಜಾತಿಶುದ್ಧಿಯ ಬದಲು ವ್ಯಕ್ತಿ – ಸಮಾಜ ಶುದ್ಧತೆಗೆ ಮಹತ್ವ ನೀಡಿ ಸ್ನಾನಘಟಕಗಳನ್ನು ವ್ಯವಸ್ಥಿತಗೊಳಿಸಿದರು.

ದೇವಾಲಯವನ್ನು ದೇವದರ್ಶನಕ್ಕಷ್ಟೇ ಬಳಸಬಾರದು ಎಂಬ ದೃಷ್ಟಿಕೋನವನ್ನು ಗುರುದೇವ ಹೊಂದಿದ್ದರು. ಅರುವಿಪುರಂ ದೇವಾಲಯದ ಸಮೀಪ ಸ್ಥಾಪಿಸಿದ್ದ ಕ್ಷೇತ್ರ ವಾವೂಟ್ಟುಯೋಗವು ನಂತರ ಎಸ್‌ಎನ್‌ಡಿಪಿ ಯೋಗವಾಗಿ ಪರಿವರ್ತಿತವಾಯಿತು. ಸಂಘಟನೆ ಮತ್ತು ಜಾಗೃತಿಗೆ ಅನುಕೂಲವಾಗುವಂತೆ ದೇವಾಲಯದ ಜೊತೆಗೆ ನಿರ್ವಹಣಾ ವ್ಯವಸ್ಥೆಗಾಗಿ ಅನೇಕ ಸಭೆಗಳನ್ನು ಸ್ಥಾಪಿಸಿದರು. ಅಲ್ಲೆಲ್ಲಾ ಸತ್ಸಂಗಗಳು, ಆಧ್ಯಾತ್ಮಿಕ ಉಪನ್ಯಾಸಗಳನ್ನು ನಡೆಸಲು ವ್ಯವಸ್ಥೆ ಮಾಡಿದರು. ದೇವಾಲಯದ ಆದಾಯದಿಂದ ಧರ್ಮಪ್ರಚಾರಕರಿಗೆ ತರಬೇತಿ ನೀಡಲು ಮತ್ತು ಧರ್ಮಪ್ರಚಾರಕ್ಕಾಗಿ ನಿಧಿ ಮೀಸಲಾಗಿಡುವಂತೆ ಗುರುದೇವ ಸೂಚಿಸಿದ್ದರು. ಗುರುದೇವರ ಈ ಸೂಚನೆಯ ಮಹತ್ವವನ್ನು ಈಗಲೂ ಹಲವರು ಸರಿಯಾಗಿ ಅರ್ಥಮಾಡಿಕೊಳ್ಳುತ್ತಾರೆಯೇ ಎಂಬುದು ಸಂಶಯ. ನೂತನ ಸನ್ಯಾಸ – ಸಂಸ್ಥಾನ – ಸಂಘಟನಾ ಮಾದರಿಗಳು, ಅನಾಚಾರ ನಿವಾರಣಾ ಪ್ರಯತ್ನಗಳು ಇವೆಲ್ಲವೂ ಅವರ ವಿಶೇಷ ಕೊಡುಗೆಗಳು ಎನ್ನುವುದು ಸತ್ಯ.

ಜೊತೆಗೆ, ಸನಾತನಧರ್ಮದ ಕಾಲಕ್ಕೆ ತಕ್ಕಂತಹ ವ್ಯಾಖ್ಯಾನಗಳು ಮತ್ತು ಅವನತಿ ನಿವಾರಣೆಗೆ ನಡೆದ ಕ್ರಿಯೆಗಳಲ್ಲಿ ಈ ಎಲ್ಲವೂ ಸೇರಿದ್ದವು. ಅವು ಕಾಲದ ಸವಾಲುಗಳನ್ನು ಅರ್ಥಮಾಡಿಕೊಂಡು ನಡೆದ ಹಿಂದೂಧರ್ಮ ಸಂರಕ್ಷಣೆಗಾಗಿ ಮಾಡಿದ ಕಾರ್ಯಚಟುವಟಿಕೆಗಳಾಗಿದ್ದವು. ಆಂತರಿಕ ಮತ್ತು ಬಾಹ್ಯವಾಗಿ ವ್ಯಾಪಿಸಿದ್ದ ಅಜ್ಞಾನದ ವಿರುದ್ಧ ಧೀರವಂತ ಹೋರಾಟವದು.

ಆದರೆ ಮುಖ್ಯಮಂತ್ರಿಯು ಹೇಳುತ್ತಿರುವುದು ಹೀಗಲ್ಲ, “ಸನಾತನಧರ್ಮವನ್ನು ಪ್ರಶ್ನಿಸಿ, ಧಿಕ್ಕರಿಸಿದ ಮೂರನೆಯ ಪ್ರಭೇದದ ಪ್ರತಿನಿಧಿ ಶ್ರೀ ನಾರಾಯಣಗುರು” ಎಂದು ಅವರು ಹೇಳಿದ್ದಾರೆ. ಈ ನಿಲುವನ್ನು ಒಪ್ಪಿಕೊಳ್ಳುಲು ಹೇಗೆ ಸಾಧ್ಯ?

ಕೆಲವು ಪ್ರಶ್ನೆಗಳು:

1) ಸನಾತನಧರ್ಮದ ಯಾವ ದರ್ಶನವನ್ನು ಅವರು ಪ್ರಶ್ನಿಸಿದ್ದಾರೆ?

2) ಅದರ ಸಾಕ್ಷ್ಯಗಳೇನು?

3) ಅವರು ಯಾವಾಗ? ಎಲ್ಲಿ? ಹೇಗೆ ಗುರು ಸನಾತನಧರ್ಮವನ್ನು ಪ್ರಶ್ನಿಸಿದರು ಅಥವಾ ಧಿಕ್ಕರಿಸಿದರು?

4) ಶ್ರೀ ನಾರಾಯಣಗುರುಗಳೊ ಅಥವಾ ಅವರ ಶಿಷ್ಯರೊ ಅವರು ಬದುಕಿದ್ದ ಸಮಯದಲ್ಲಿ ಸನಾತನಧರ್ಮವನ್ನು ಪ್ರಶ್ನಿಸಿದ್ದಾರೆಯೇ?
ಉದಾಹರಣೆಯಾಗಿ ಕುಮಾರನ್ ಆಶಾನ್ ರ ನಿಲುವನ್ನು ಪರೀಕ್ಷಿಸಬಹುದು.
ಸನಾತನಧರ್ಮಸಾರ ಉಜ್ವಲವಾಗಿದೆ, ಸಂಪ್ರದಾಯವಾದವನ್ನು ವಿರೋಧಿಸಬೇಕು ಎಂಬ ನಿಲುವನ್ನೆ ಶ್ರೀ ನಾರಾಯಣಗುರು ಹಾಗೆಯೇ ಅವರ ವಾತ್ಸಲ್ಯ ಶಿಷ್ಯನಾಗಿದ್ದ ಎಸ್‌ಎನ್‌ಡಿಪಿ ಯೋಗದ ಪ್ರಥಮ ಜನರಲ್ ಸೆಕ್ರೆಟರಿ ಆಗಿದ್ದ ಮಹಾಕವಿ ಕುಮಾರನ್ ಆಶಾನ್ ಹೊಂದಿದ್ದರು. ಅವರ “ಮತಪರಿವರ್ತನ ರಸವಾದ” ಎಂಬ ಕೃತಿಯೇ ಇದಕ್ಕೆ ಉತ್ತಮ ಉದಾಹರಣೆಯಾಗುತ್ತದೆ. ಈ ವಿಷಯವನ್ನು ಸ್ಪಷ್ಟಪಡಿಸಲು ಹಲವಾರು ಸಾಕ್ಷಿಗಳಿದ್ದರೂ, ಕೆಲವೊಂದನ್ನು ಮಾತ್ರ ಈಗ ಸೂಚಿಸೋಣ.

ನಾಲ್ಕು ವೇದಗಳು ಭಿನ್ನಾಭಿಪ್ರಾಯಗಳಿಲ್ಲದೆ ಒಂದೇ ಸತ್ಯವನ್ನು ಹೊಗಳುತ್ತವೆ – ದುರವಸ್ಥಾ ಎನ್ನುವ ಕೃತಿಯಲ್ಲಿ ಕುಮಾರನ್ ಆಶಾನ್ ಸೂಚಿಸುತ್ತಾರೆ.

ಸನಾತನಧರ್ಮದ ಆರ್ಷಗುರುಪರಂಪರೆಗಳು, ವೇದೋಪನಿಷತ್ತುಗಳು, ಸಿದ್ಧರು ಬರೆದ ದಿವ್ಯಸ್ತೋತ್ರಗಳು, ಪರಬ್ರಹ್ಮ ಅಥವಾ ಪರಮೇಶ್ವರನ ಏಕತ್ವದರ್ಶನವು, ಸರ್ವವ್ಯಾಪಿ ಸಿದ್ಧಾಂತ, ಸರ್ವಾಂತರ್ಯಾಮಿ ಸಿದ್ಧಾಂತ, ಪ್ರಕೃತಿ-ಪುರುಷ ಅಭೇದದರ್ಶನ (ಅದ್ವೈತ ದರ್ಶನ) ಎಲ್ಲವೂ ಸ್ಪಷ್ಟವಾಗಿ ಘೋಷಿಸುತ್ತವೆ. ಇದಕ್ಕೆ ಸಾವಿರಾರು ಬೆಳಗಿನ ಉದಾರಣೆಗಳನ್ನು ಸೂಚಿಸುಲು ಸಾಧ್ಯತೆವಿದೆ.

“ಎಲ್ಲಾ ಮನುಷ್ಯರು ಸಮಾನರು” ಎಂಬ ಸಮತ್ವ ತತ್ವ, ಅದಕ್ಕಿಂತ ಶ್ರೇಷ್ಠವಾದ ಎಲ್ಲಾ ಜೀವಿಗಳು ಒಂದು ಎಂಬ “ಜೀವಬ್ರಹ್ಮೈಕ್ಯ” ಸಿದ್ಧಾಂತವನ್ನು ಘೋಷಿಸಿದ ದರ್ಶನವೇ ಸನಾತನಧರ್ಮದ, ಈ ಅದ್ವೈತ ದರ್ಶನವೂ ಸಮತ್ವಕ್ಕಿಂತ ಶ್ರೇಷ್ಠ ದರ್ಶನ.

ಎಲ್ಲಾ ಲೋಕಗಳಲ್ಲು ಪರಮೇಶ್ವರನು (ಪರಬ್ರಹ್ಮ) ವ್ಯಾಪಿಸಿದ್ದಾನೆ ಎಂಬ ಸಿದ್ಧಾಂತವೇ ಸರ್ವವ್ಯಾಪಿ ಸಿದ್ಧಾಂತ. ಸಚೇತನ ಮತ್ತು ಅಚೇತನ ವಸ್ತುಗಳಲ್ಲಿ (ಅಣುವಿನಿಂದಲೇ) ಆತ್ಮಸ್ವರೂಪದಲ್ಲಿ (ಜೀವನ್ ಅಲ್ಲ ಆತ್ಮ!) ನೆಲೆಸಿದೆ ಎನ್ನುವ ದರ್ಶನವೇ ಸರ್ವಾಂತರ್ಯಾಮಿ ಸಿದ್ಧಾಂತ. ಅಷ್ಟೇಯಲ್ಲ, ಜೀವಿಗಳಲ್ಲಿ (ಜೀವಯಿರುವ ಮತ್ತು ಜೀವಯಿಲ್ಲದ) – ಪ್ರಕೃತಿ ಮತ್ತು ಈಶ್ವರ ಎಲ್ಲವೂ ಒಂದೇ ಎನ್ನುವ ದರ್ಶನವೇ ಅದ್ವೈತ ವೇದಾಂತ ಸಾರ. ಅಂದರೆ ಮೂಲಭೂತವಾಗಿ(ಕೊನೆಯದಾಗಿ) ಈಶ್ವರನಲ್ಲದೆ ಬೇರೇನು ಅಲ್ಲ.

ತತ್ವಮಸಿ, ಪ್ರಜ್ಞಾನಂ ಬ್ರಹ್ಮ, ಅಹಂ ಬ್ರಹ್ಮಾಸ್ಮಿ, ಅಯಮಾತ್ಮ ಬ್ರಹ್ಮ, ಸೋಹಂ, ಹಂಸ, ಶಿವೋಹಂ- ಹೀಗೆ ಅನೇಕ ಪವಿತ್ರವಾಕ್ಯಗಳು!
ಸನಾತನಧರ್ಮ ಅಲ್ಲದೆ ಬೇರೆಲ್ಲೂ ಸಿಗದ ಈ ಉಜ್ವಲ ದರ್ಶನಗಳನ್ನು ಯಾರಿಗೆ ನಿರಾಕರಿಸಲು ಸಾಧ್ಯ? ಆದರೆ, ಅಂದಿನ ಸಾಂಪ್ರದಾಯವಾದಿಗಳು – ಜಾತಿವಿರೋಧಿವಾದಿಗಳು ಸನಾತನ ಧರ್ಮಕ್ಕೆ ಏನು ಮಾಡಿರುವರು?

ಕುಮಾರನ್ ಆಶಾನ್ ಮುಂದುವರೆಯುತ್ತಾ:
 
“ವೈದಿಕಮಾನಿಕಳ್ ಮರ್ತ್ತ್ಯರಿಲ್ ಭೇದವನ್ನೂ ಭೇದತ್ತಿಲ್ ಭೇದವುಂ ಜಲ್ಪಿಕ್ಯುನ್ನು” – ಅಂದರೆ, ವೇದಗಳನ್ನು ಪಾಲಿಸುತ್ತೇವೆ ಎಂದು ಹೇಳುವವರೇ ವೇದದ ವಿರುದ್ಧ ಕೆಲಸ ಮಾಡುತ್ತಾರೆ ಎಂದು ಆಶಾನ್ ಸೂಚಿಸುತ್ತಾರೆ. ಮಹತ್ತಾದ ಬ್ರಾಹ್ಮವಿದ್ಯೆಯ ಮೂಲಭೂತ ತತ್ವಗಳನ್ನು ಅದಃಪತನಗೊಳಿಸಿದರ ಕುರಿತು ಆಶಾನ್ ವಿಷಾದಿಸುತ್ತಾರೆ. ಅವರು ಒಂದು ಉದಾಹರಣೆಯಲ್ಲಿ ವ್ಯಾಖ್ಯಾನಿಸುತ್ತಾರೆ:
“ಎಂದೊರು ವೈಕ್ರಿತಂ ಬ್ರಹ್ಮವಿದ್ಯೆ ನಿನ್ನಿಲ್ ಎಂದಾಣಿಕಾಣುನ್ನಾ ವೈಪರೀತ್ಯಂ? ನಿರ್ಣಯಂ ನಿನ್ನೆಪ್ಪೋಳ್ ಪಾರಿಲ್ಅದೋಗತಿ ನಿನ್ನವರ್ ಗಂಗೆಕ್ಯುಮ್ಉಂಡಾಯಿಲ್ಲಾ”
ಸನಾತನಧರ್ಮ ಮತ್ತು ಜಾತಿ ಆಧಾರಿತ ಸಾಂಪ್ರದಾಯವಾದಗಳ ನಡುವೆಯಿರುವ ವೈರುಧ್ಯವೂ ಯಾರಿಗೂ ಬೇಕಾದರೂ ಕಾಣುವಂತೆ ಸ್ಪಷ್ಟವಾಗಿದೆ. ಮನುಷ್ಯರ ನಡುವೆ ಭೇದವನ್ನು ತರುತ್ತಿದ್ದ ಜಾತಿ ಆಧಾರಿತ ಸಾಂಪ್ರದಾಯವಾದವು ವೇದಗಳ ವಿರುದ್ಧ ಎನ್ನುವ ಸತ್ಯವನ್ನು ಗುರುದೇವರಿಗು ಮತ್ತು ಅವರ ಶಿಷ್ಯರಿಗೂ ತಿಳಿದಿತ್ತು.
ಇಲ್ಲಿ ಪ್ರಶ್ನೆಗಳು ಸ್ಪಷ್ಟವಾಗಿವೆ. ಸನಾತನಧರ್ಮಕ್ಕೋ, ವೇದಗಳಿಗೋ, ಬ್ರಹ್ಮವಿದ್ಯೆಗೊ ವಿರುದ್ಧವಾಗಿ ಆಶಾನ್ ಮಾತನಾಡುತ್ತಿದ್ದಾರೆಯೇ? ಅದರ ಅದ್ಹಪತನದ ಬಗ್ಗೆ ಅಲ್ಲವೇ? ಮಹತ್ತಾದ ಸಿದ್ಧಾಂತಗಳನ್ನು ವಿರೂಪಗೊಳಿಸುವುದರ, ಮಿತಿಗೊಳಿಸಿ ವಿಕೃತವಾಗಿಸುವುದರ, ಕಲುಷಿತಗೊಳಿಸುವುದರ ಪ್ರಯತ್ನಗಳ ವಿರುದ್ಧ ಕುಮಾರನ್ ಆಶಾನ್ ಮತ್ತು ಅವರ ಗುರುದೇವರು ಕಾರ್ಯನಿರ್ವಹಿಸಿದ್ದು ಎನ್ನುವುದು ಇದರಿಂದ ವ್ಯಕ್ತವಾಗುವುದಲ್ಲವೇ?
ಸನಾತನ ಧರ್ಮದ ಸರ್ವಸ್ವವಾಗಿರುವ (ಬೇರ್ಪಡಿಸಲಾಗದಂತೆ ಅಣುವಿನಂತಿರುವ) ಈಶ್ವರ ದರ್ಶನ ಮತ್ತು ಜೀವಿತ ದರ್ಶನದ ವಿರುದ್ಧ ಕೆಲ ಪಟ್ಟಭದ್ರ ಹಿತಾಸಕ್ತಿಗಳು ನಡೆಸಿದ ವಿಧ್ವಂಸಕತೆಗಳು ಜೊತೆಗೆ ಸ್ವಾಧ್ಯಾಯರಹಿತ್ಯದ ಮೂಲಕ ಸ್ವಾಭಾವಿಕವಾಗಿ ಉಂಟಾದ ಅವನತಿಗಳು ಅದರಿಂದಾದ ಅಧೋಗತಿಗಳು – ಇವೆಲ್ಲಾ ಪರಿಹರಿಸಬೇಕಾದ ಸಮಸ್ಯೆಗಳಾಗಿದ್ದವು. ಗುರುದೇವರು ವಿರೋಧಿಸಿದ್ದು(ಪ್ರಶ್ನಿಸಿದ್ದು) ಈ ಜಾತಿಆಧಾರಿತ ಸಂಪ್ರದಾಯವಾದವನ್ನೇ ಹೊರತು ಸನಾತನ ಧರ್ಮವನ್ನಲ್ಲ.
ವಿವಿಧ ಆರ್ಷಗುರುಪರಂಪರೆಗಳು, ನಾಥಸಿದ್ಧಯೋಗಿಗಳು, ತಮಿಳುನಾಡಿನ ಸಿದ್ಧಪರಂಪರೆ, ಶ್ರೀ ಶಂಕರಾಚಾರ್ಯರು, ಬಸವೇಶ್ವರರು, ಭಕ್ತಿ ಚಳುವಳಿಯ ಆಚಾರ್ಯರು, ಶ್ರೀರಾಮಕೃಷ್ಣ ಮಿಷನ್, ಬ್ರಹ್ಮ ಸಮಾಜ, ಪ್ರಾರ್ಥನ ಸಮಾಜ, ಆರ್ಯ ಸಮಾಜ, ತಿಯೊಸೊಫಿಕಲ್ ಸೊಸೈಟಿ, ಮಹರ್ಷಿ ಅರವಿಂದ ಘೋಷ್, ತೈಕಾಡ್ ಅಯ್ಯಾವು ಗುರು, ಅಯ್ಯಾ ವೈಕುಂಠ ಸ್ವಾಮಿ, ಚಟ್ಟಂಬಿ ಸ್ವಾಮಿ, ಸದಾನಂದ ಗುರುಸ್ವಾಮಿ, ಶುಭಾನಂದ ಗುರುದೇವನ್, ವಾಗ್ಭಟ್ಟಾನಂದ, ಬ್ರಹ್ಮಾನಂದ ಶಿವಯೋಗಿ, ಶಿವಾನಂದ ಪರಮಹಂಸ, ಆಗಮಾನಂದ ಸ್ವಾಮಿಗಳು, ಶ್ರೀ ಚಟ್ಟಂಬಿ ಸ್ವಾಮಿ ಮತ್ತು ಶ್ರೀ ನಾರಾಯಣ ಗುರುಗಳ ಶಿಷ್ಯರು, ಮುಂತಾದವರೆಲ್ಲ ಸನಾತನಧರ್ಮದ ಪ್ರತಿಪಾದಕರಾಗಿ ದಿಟ್ಟವಾಗಿ ನೆಲೆನಿಂತು ಸನಾತನ ಧರ್ಮದ ವಿರುದ್ಧವಿದ್ದ ಜಾತಿಆಧಾರಿತ ಸಂಪ್ರದಾಯವಾದದ ಮತ್ತು ಅನಾಚಾರಗಳ ವಿರುದ್ಧ ಹೋರಾಡಿದವರು.
ಕೇರಳದಿಂದ ಹಿಡಿದು ಕಾಶ್ಮೀರದವರೆಗಿನ ರಾಜ್ಯಗಳಲ್ಲಿ ಕಾರ್ಯನಿರ್ವಹಿಸಿದ ದೀರ್ಘಕಾಲೀನ ನವೋದಯ ಸಂಪ್ರದಾಯದ ಗುರುಗಳೆಲ್ಲಾ, ಸನಾತನ ಧರ್ಮವನ್ನು ಜಾತಿ ಆಧಾರಿತ ಸಂಪ್ರದಾಯವಾದದಿಂದ ರಕ್ಷಿಸಲೆಂದೆ ಶ್ರಮಿಸಿದ್ದು. ಇದನ್ನೇ ಗುರುದೇವರು ಮಾಡಿದ್ದು, ಅಂದರೆ ‘ಇಲಿಯನ್ನು ಕೊಲ್ಲಲು, ಇರುವ ನಿವಾಸವನ್ನೇ ಸುಡುವುದಲ್ಲ’ ಎಂದು ಅವರು ತಿಳಿದಿದ್ದರು.
ಯಾರಿಗೆ ಬೇಕಾದರೂ ಸ್ಪಷ್ಟವಾಗಿ ಕಾಣುವಂತಹ ಈ ಸತ್ಯ ಸಂಗತಿಗಳನ್ನು ಮುಖ್ಯಮಂತ್ರಿ ಹೇಳಿದಿದ್ದರೆ ಎಲ್ಲರೂ ಅದನ್ನು ಪೂರ್ಣ ಮನಸ್ಸಿನಿಂದ ಸ್ವಾಗತಿಸಬಹುದಿತ್ತು! ಕನಿಷ್ಠಪಕ್ಷ, ಸನಾತನ ಧರ್ಮದ ಪುನರುಜ್ಜೀವನ ಅಥವಾ ಹಿಂದೂ ಧರ್ಮ ನವೀಕರಣ ಎಂದಾದರೂ ಹೇಳಬಹುದಿತ್ತು! ಆದರೆ ಅದರ ಬದಲು ಅವರು ಹೇಳುವುದು, ಸನಾತನ ಧರ್ಮವನ್ನು ಮತ್ತು ಅದರ ಆಶಯಗಳನ್ನು ಧಿಕ್ಕರಿಸುವಂತಹ ವಿಧದಲ್ಲಿದೆ ಎಂಬ ಅರ್ಥವನ್ನು ಕೊಡುತ್ತದೆ. ಅದಕ್ಕಿಂತ ಹೆಚ್ಚಾಗಿ, ಪುನರುಜ್ಜೀವನದ ನಾಯಕರಾದ ಋಷಿಗಳು – ಶ್ರೀ ನಾರಾಯಣ ಗುರುಗಳ ಸಮೇತ ಯಾರು ಸಹ ಇಂತಹ ದೃಷ್ಟಿಕೋನವನ್ನು ಹೊಂದಿರಲಿಲ್ಲ ಎನ್ನುವುದು ಸತ್ಯ. ಹಾಗೆ ಹೇಳುವುದು ಆ ಶ್ರೇಷ್ಠ ವ್ಯಕ್ತಿತ್ವಗಳ ಧನ್ಯಜೀವಿತವನ್ನು ಅವಹೇಳನ ಮಾಡುವುದಕ್ಕೆ ಸಮ.
ಜಾತಿ ವ್ಯವಸ್ಥೆಯ ಕ್ರೂರತೆಯನ್ನು ಅನುಭವಿಸುವಾಗಲು ಸಹ, ಅದಕ್ಕೆ ಸನಾತನ ಧರ್ಮವೇ ಜವಾಬ್ದಾರಿ ಎಂದು ಚಿಂತಿಸುವುದಕ್ಕೊ, ಹೇಳುವುದಕ್ಕೆೊ, ಅದರ ಬಗ್ಗೆ ಕೆಟ್ಟದಾಗಿ ಮಾತನಾಡುವುದಕ್ಕೊ ಅಥವಾ ಧರ್ಮವನ್ನು ತಿರಸ್ಕರಿಸಲೊ ಅವರು ತಯಾರಾಗಲಿಲ್ಲ. ಅಷ್ಟೇಯಲ್ಲ, ಹಾಗೆ ಚಿಂತಿಸಿದವರನ್ನೂ ಸಹ ಅವರು ಶಕ್ತವಾದ ಸಾಕ್ಷಿಗಳ ಮೂಲಕ ತಿದ್ದಿ ಸರಿಪಡಿಸಿದ್ದಾರೆ. ಶ್ರೀ ನಾರಾಯಣ ಗುರುವಿನಂತೆಯೇ ಈ ಪುನರುಜ್ಜೀವನದ ಗುರುಗಳೆಲ್ಲರೂ ಮತಾಂತರಗಳ ವಿರುದ್ಧವು ನಿಂತಿದ್ದರು. ಹೋಗಿದ್ದವರನ್ನು ಮರಳಿ ಕರೆತರಲೂ ಶ್ರಮಿಸಿದ್ದಾರೆ.

ಚಟ್ಟಂಬಿ ಸ್ವಾಮಿಗಳ ಕಾರ್ಯಚಟುವಟಿಕೆಗಳನ್ನು ವೇದಾಧಿಕಾರ ನಿರೂಪಣಂ ಮತ್ತು ಕ್ರಿಸ್ತುಮತ ಛೇದನಂ ಮುಂತಾದ ಕೃತಿಗಳನ್ನು ಗಮನಿಸಿ. ಅಯ್ಯನ್ಕಾಳಿಯವರ ಮೇಲೆ ಶಕ್ತವಾದ ಪ್ರಭಾವವನ್ನು ಬೀರಿದ್ದ ಸದಾನಂದ ಸ್ವಾಮಿಗಳು, ಶುಭಾನಂದ ಗುರುದೇವರು, ಆಗಮನಂದ ಸ್ವಾಮಿಗಳು, ಮುಂತಾದವರೆಲ್ಲಾ ಈ ಮಾರ್ಗದಲ್ಲೇ ನಡೆದದ್ದು.
Guruparamparas
ಸನಾತನ ಧರ್ಮ, ಶ್ರೀ ನಾರಾಯಣ ಧರ್ಮ, ಗುರುದೇವರ ಜೀವನ ಚರಿತ್ರೆ, ಅವರ ಕೃತಿಗಳು, ನವೋದಯದ ಇತಿಹಾಸಗಳನ್ನು ಅಧ್ಯಯನ ಮಾಡಲು ಸಮಯ ಸಿಗದ ಆಧುನಿಕ ರಾಜಕೀಯ ನಾಯಕರಿಗೆ ಈ ವಿಷಯಗಳ ಬಗ್ಗೆಯೆಲ್ಲಾ ಸರಿಯಾದ ತಿಳುವಳಿಕೆ ಇರಬೇಕೆಂದಿಲ್ಲ. ಅವರು ಶ್ರೀ ನಾರಾಯಣ ಗುರು ದೇವರನ್ನು ” ಹಿಂದೂ ಧರ್ಮ ವಿರೋಧಿಯನ್ನಾಗಿಸಲು” ಮತ್ತು “ನಾಸ್ತಿಕರನ್ನಾಗಿ” ಮಾಡಲು ಹಿಂಜರಿಯುವುದಿಲ್ಲ – ಹಾಗಾಗಿಯೇ ಅಲ್ಲವೇ ಅವರು ಸನಾತನ ಧರ್ಮವನ್ನು ವಿರೋಧಿಸಿದರು, ಧಿಕ್ಕರಿಸಿದರು, ಟೀಕಿಸಿದರು ಎಂದು ಸಾರ್ವಜನಿಕವಾಗಿ ಹೇಳುತ್ತಿರುವುದು? ಆದರೆ ಇವರುಗಳು ಹೇಳುವಂತಲ್ಲಾ ಶ್ರೀ ನಾರಾಯಣ ಗುರುಗಳನ್ನು EMS ಮೌಲ್ಯಮಾಪಿಸಿದ್ದು, ಭಿನ್ನಾಭಿಪ್ರಾಯಗಳಿದ್ದರು ಸಹ ಶ್ರೀ ನಾರಾಯಣ ಗುರುವನ್ನು “ಆರ್ಷ ಸಂದೇಶ ಪ್ರಚಾರಕ” ಎಂದು ಅವರು ಉಲ್ಲೇಖಿಸಿದ್ದರು. ಇದನ್ನು ಮುಂದಿನ ಲೇಖನ ಸರಣಿಯಲ್ಲಿ ಬೆಳಕಿಗೆ ತರುತ್ತೇವೆ.

(ಮುಂದುವರೆಯುತ್ತದೆ. . .)